ಹೊಂಬಾಳೆ ಫಿಲಮ್ಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಾಯಕನಾಗಿ ನಟಿಸುತ್ತಿರುವ ‘ಕೆಜಿಎಫ್’ ಚಿತ್ರ ಜೂನ್ ೯ರ ಬೆಳಿಗ್ಗೆ ಮುಹೂರ್ತ ಆಚರಿಸಿಕೊಂಡಿತು.
ಉಗ್ರಂ ಚಿತ್ರದಿಂದ ಹೆಸರು ಮಾಡಿರುವ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ನಟಿಸುತ್ತಿರುವುದರಿಂದ ಈ ಚಿತ್ರ ಯಾವಾಗ ಆರಂಭವಾಗುತ್ತದೆ ಎಂಬುದರ ಬಗ್ಗೆ ಕುತೂಹಲಗಳಿದ್ದವು. ಆದರೆ ಇಂದು ‘ಕೆಜಿಎಫ್’ ಚಿತ್ರ ಅಧಿಕೃತವಾಗಿ ಚಾಲನೆಗೊಂಡಿದೆ. ‘ಕೆಜಿಎಫ್’ ಚಿತ್ರಕ್ಕೆ ಮಹಾಲಕ್ಷ್ಮಿ ಲೇಔಟ್ನಲ್ಲಿರುವ ಪಂಚಮುಖಿ ಗಣೇಶ ಸನ್ನಿಧಿಯಲ್ಲಿ ಸರಳವಾಗಿ ಮುಹೂರ್ತ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಾಯಕ ನಟ ಯಶ್, ನಿರ್ಮಾಪಕ ವಿಜಯ್, ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರ್ ಸೇರಿದಂತೆ ಚಿತ್ರತಂಡದ ಬಹುತೇಕ ಸದಸ್ಯರು ಹಾಜರಿದ್ದರು.
ಕೆ.ಜಿ.ಎಫ್ ಚಿತ್ರಕ್ಕೆ ಖ್ಯಾತ ಸ್ಥಿರಚಿತ್ರ ಛಾಯಾಗ್ರಾಹಕ ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ರವಿ ಸಂತೇಹಕ್ಲು ಮತ್ತು ಸುರೇಶ್ ದೊಡ್ಡಮನಿ ಕಲಾನಿರ್ದೇಶನ, ರವಿವರ್ಮ ಸಾಹಸ ಸಂಯೋಜನೆ, ರಾಮರಾವ್ ಮತ್ತು ಕಾರ್ತಿಕ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.